13
July, 2025

A News 365Times Venture

13
Sunday
July, 2025

A News 365Times Venture

UPSC ಪರೀಕ್ಷೆಯಲ್ಲಿ RANK ಪಡೆದು ಸಾಧನೆಗೈದ ಯುವತಿಗೆ ಕೆ.ಎಸ್ ರಂಗಪ್ಪರಿಂದ ಸನ್ಮಾನ

Date:

ಮೈಸೂರು,ಏಪ್ರಿಲ್,29,2025 (www.justkannada.in): 2024-25ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ  263ನೇ ಸ್ಥಾನ ಪಡೆದು  ಸಾಧನೆಗೈದ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಕುಗ್ರಾಮ ಅಂಕನಹಳ್ಳಿಯ ಪ್ರೀತಿ ಅವರಿಗೆ ವಿಜ್ಞಾನಿ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಸನ್ಮಾನಿಸಿದರು.

ಪ್ರೀತಿ ಎ.ಸಿ ಅವರು ತಾವು ಹುಟ್ಟದ ಸಾಲಿಗ್ರಾಮ ತಾಲ್ಲೂಕು ಅಂಕನಹಳ್ಳಿ ಗ್ರಾಮದಲ್ಲೇ ತಮ್ಮ  ಬಾಲ್ಯ ವಿದ್ಯಾಭ್ಯಾಸ ಮಾಡಿ  ನಂತರ ಪದವಿ ಶಿಕ್ಷಣ ವನ್ನು  ಕೆ ಆರ್‌  ನಗರದ ಪದವಿ  ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪೂರೈಸಿದರು.  ಸ್ನಾತೋಕತ್ತರ ಪದವಿಯನ್ನು ಕೃಷಿ ವಿಷಯದಲ್ಲಿ ಉನ್ನತ ಶ್ರೇಣಿಯಲ್ಲಿ ತೇಗರ್ಡೆಹೊಂದಿ ಇದೀಗ 2024-25ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ  263ನೇ ಸ್ಥಾನ ಪಡೆದು  ತಮ್ಮ  ಹುಟ್ಟೂರಿಗೆ  ತಾಲ್ಲೂಕಿಗೆ  ಪೋಷಕರಿಗೆ  ಜಿಲ್ಲೆಗೆ ರಾಜ್ಯಕ್ಕೆ   ಕೀರ್ತಿ ತಂದಿದ್ದಾರೆ.

ಈ  ಮಧ್ಯೆ ಇಂದು ಪ್ರೀತಿ ಅವರು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಅವರನ್ನ ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಈ ವೇಳೆ ರಂಗಪ್ಪ ಅವರು ಯುಪಿಎಸ್ ಸಿ ಸಾಧನೆಗೈದ ಪ್ರೀತಿ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಬಳಿಕ ವಿಕಸಿತ ಭಾರತದಲ್ಲಿ ವಿಜ್ಞಾನದ ಏಳಿಗೆಗೆ ಆಧಿಕಾರಿಗಳ ಪಾತ್ರ  ಮತ್ತು  ಇಂದಿನ ಶಿಕ್ಷಣ ಮಟ್ಟದ ಕುರಿತು  ಸುಧೀರ್ಘವಾಗಿ ಕೆ ಎಸ್‌ ರಂಗಪ್ಪ ಅವರ ಜೊತೆ  ಪ್ರೀತಿ ಅವರು ಚರ್ಚಿಸಿದರು.

ಈ ವೇಳೆ ಸಮಾಜ ಸೇವಕ  ಕೆ. ಎಲ್‌ ರಮೇಶ್‌, ಕೆ ಆರ್‌ ನಗರ ಸರ್ಕಾರಿ ನೌಕರರ ಸಂಘದ ನಿದೇರ್ಶಕ ರಾಜಶೇಖರ್‌ ಮತ್ತು  ಉದಯೋನ್ಮುಖ ಸಾಹಿತಿ ನಂಜನಗೂಡು ತಾಲ್ಲೂಕಿನ  ಸರ್ಕಾರಿ ನೌಕರರ ಸಂಘದ  ಅದ್ಯಕ್ಷ ದೀಪು, ಶಿಕ್ಷಕ ಪಾಲಾಕ್ಷ  ಇನ್ನಿತರರು ಉಪಸ್ಥಿತರಿದ್ದರು.

Key words: K.S. Rangappa, Honor, young woman, achieved, UPSC exam

The post UPSC ಪರೀಕ್ಷೆಯಲ್ಲಿ RANK ಪಡೆದು ಸಾಧನೆಗೈದ ಯುವತಿಗೆ ಕೆ.ಎಸ್ ರಂಗಪ್ಪರಿಂದ ಸನ್ಮಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....

ಬೀದಿನಾಯಿಗಳಿಗೆ ಬಿರಿಯಾನಿ: ಲೂಟಿ ಮಾಡುವ ಉದ್ದೇಶ- ಆರ್‌.ಅಶೋಕ್

ಬೆಂಗಳೂರು, ಜುಲೈ 12,2025 (www.justkannada.in): ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ...