ದಾವಣಗೆರೆ,ಏಪ್ರಿಲ್,13,2026 (www.justkannada.in): ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.
ಪೀಠದಲ್ಲಿ ನಡೆದ 15 ಜನರ ಧರ್ಮದರ್ಶಿ ಸಭೆಯಲ್ಲಿ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ವಚನಾನಂದ ಶ್ರೀಗಳು ಹರಿಹರ ಪೀಠದ ಜವಾಬ್ದಾರಿಯ ಜೊತೆಗೆ ಬೆಂಗಳೂರಿನ ತಮ್ಮ ಹಳೆಯ ‘ಶ್ವಾಸ ಯೋಗ ಪೀಠ’ವನ್ನೂ ಮುಂದುವರಿಸುತ್ತಿರುವುದು ಟ್ರಸ್ಟ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.
ಪೀಠಾರೋಹಣದ ಸಮಯದಲ್ಲಿ ನೀಡಿದ ಭರವಸೆಯಂತೆ ಶ್ವಾಸ ಪೀಠವನ್ನು ತ್ಯಜಿಸಿ, ಪೂರ್ಣ ಪ್ರಮಾಣದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಟ್ರಸ್ಟಿಗಳು ಒತ್ತಾಯಿಸಿದ್ದರು.
ಸಮುದಾಯದ ಮುಖಂಡರು ಮತ್ತು ಟ್ರಸ್ಟಿಗಳು ವಚನಾನಂದ ಶ್ರೀಗಳು ಎರಡೂ ಪೀಠಗಳನ್ನು ನಿಭಾಯಿಸುವ ಬದಲು ಯಾವುದಾದರೂ ಒಂದಕ್ಕೆ ಸೀಮಿತವಾಗಬೇಕು ಎಂದು ಪಟ್ಟು ಹಿಡಿದಿರುವುದು ಈ ವಿವಾದಕ್ಕೆ ಕಾರಣವಾಗಿದೆ.
Key words: Vachanananda Swamiji ,expelled, from, Panchamasali Gurupeeth
The post ಪಂಚಮಸಾಲಿ ಗುರುಪೀಠದಿಂದ ವಚನಾನಂದಸ್ವಾಮೀಜಿ ಉಚ್ಚಾಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




