14
April, 2026

A News 365Times Venture

14
Tuesday
April, 2026

A News 365Times Venture

ಪಂಚಮಸಾಲಿ ಗುರುಪೀಠದಿಂದ ವಚನಾನಂದಸ್ವಾಮೀಜಿ ಉಚ್ಚಾಟನೆ

Date:

ದಾವಣಗೆರೆ,ಏಪ್ರಿಲ್,13,2026 (www.justkannada.in):  ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

ಪೀಠದಲ್ಲಿ ನಡೆದ 15 ಜನರ ಧರ್ಮದರ್ಶಿ ಸಭೆಯಲ್ಲಿ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ವಚನಾನಂದ ಶ್ರೀಗಳು ಹರಿಹರ ಪೀಠದ ಜವಾಬ್ದಾರಿಯ ಜೊತೆಗೆ ಬೆಂಗಳೂರಿನ ತಮ್ಮ ಹಳೆಯ ‘ಶ್ವಾಸ ಯೋಗ ಪೀಠ’ವನ್ನೂ ಮುಂದುವರಿಸುತ್ತಿರುವುದು ಟ್ರಸ್ಟ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪೀಠಾರೋಹಣದ ಸಮಯದಲ್ಲಿ ನೀಡಿದ ಭರವಸೆಯಂತೆ ಶ್ವಾಸ ಪೀಠವನ್ನು ತ್ಯಜಿಸಿ, ಪೂರ್ಣ ಪ್ರಮಾಣದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಟ್ರಸ್ಟಿಗಳು ಒತ್ತಾಯಿಸಿದ್ದರು.

ಸಮುದಾಯದ ಮುಖಂಡರು ಮತ್ತು ಟ್ರಸ್ಟಿಗಳು ವಚನಾನಂದ ಶ್ರೀಗಳು ಎರಡೂ ಪೀಠಗಳನ್ನು ನಿಭಾಯಿಸುವ ಬದಲು ಯಾವುದಾದರೂ ಒಂದಕ್ಕೆ ಸೀಮಿತವಾಗಬೇಕು ಎಂದು ಪಟ್ಟು ಹಿಡಿದಿರುವುದು ಈ ವಿವಾದಕ್ಕೆ ಕಾರಣವಾಗಿದೆ.

Key words: Vachanananda Swamiji ,expelled, from, Panchamasali Gurupeeth

The post ಪಂಚಮಸಾಲಿ ಗುರುಪೀಠದಿಂದ ವಚನಾನಂದಸ್ವಾಮೀಜಿ ಉಚ್ಚಾಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೇಂದ್ರದ ಜಿಡಿಪಿಗಿಂತ ರಾಜ್ಯದ GDP ಉತ್ತಮ ಎಂದ ಸಿಎಂಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK

ಬೆಂಗಳೂರು,ಏಪ್ರಿಲ್,14,2026 (www.justkannada.in): ಕೇಂದ್ರ ಸರ್ಕಾರದ ಜಿಡಿಪಿಗಿಂತ ರಾಜ್ಯದ ಜಿಡಿಪಿ ಉತ್ತಮವಾಗಿದೆ ಎಂದು...

ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ

ದಾವಣಗೆರೆ,ಏಪ್ರಿಲ್,14,2026 (www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಿಂದ...

ಖರ್ಗೆ ಮುಂದೆ ನಮ್ಮ ಬೇಡಿಕೆ ಇಟ್ಟಿದ್ದೇವೆ: ರಾಹುಲ್ ಗಾಂಧಿ ಭೇಟಿಗೆ ಯತ್ನ- ಶಾಸಕ ಟಿ.ಬಿ ಜಯಚಂದ್ರ

ನವದಹಲಿ,ಏಪ್ರಿಲ್,14,2026 (www.justkannada.in):   ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ  ಹೈಕಮಾಂಡ್ ಭೇಟಿ ಮಾಡಲು...

MYSORE; ವಿಶ್ವವಿಖ್ಯಾತ KRS ನಲ್ಲಿ UPI ಇನ್ನೂ “ನಗದು”..!

  ಮೈಸೂರು, ಏಪ್ರಿಲ್ 14: ವಿಶ್ವಪ್ರಸಿದ್ಧ ಕೆ.ಆರ್.ಎಸ್.‌ ಬೃಂದಾವನ (KRS Brindavan Gardens)...